Sunday, September 4, 2011

"ಮನದ ಮಾತು" ನನ್ನ ತಂಗಿಗಾಗಿ

ನನ್ನ ಮುದ್ದು ತಂಗಿ... "ಅಂಬು"
     ಅಂಬು.....
ಉಸಿರು ಕಟ್ಟಿದಂತಿದೆ
ಮನವೆಲ್ಲ ಮರುಗಟ್ಟಿದಂತಿದೆ
ಎದೆಯಲ್ಲಿ ಉಳಿದ ನಿನ್ನ ನೆನಪುಗಳು
ಗುಣುಗುಟ್ಟಿದಂತಿದೆ!
ನೀನೇಕೆ ನಮ್ಮಿಂದ ಬಲು ದೂರ ಹೋದೆ?
ಅಷ್ಟೊಂದು ದೂರಾ?
ನಾ ಬರಲಾರದಷ್ಟು ದೂರ?
ನಿನ್ನ ಮತ್ತೆ ನೋಡಲಾಗದಷ್ಟು ದೂರ?
ಕಣ್ಣುಗಳು ಬಯಸಿದರು 
ಕಾಣಸಿಗದಷ್ಟು ದೂರಾ?
ಮಾತಾಡಲು ಸಾವಿರಾರು ವಿಷಯ
ನಿನಗಾಗಿ ಇದ್ದರೂ...
ನೀ ಕೇಳಿಸಿಕೊಳ್ಳಲಾಗದಷ್ಟು ದೂರ?
ಇದೆಂಥ ಮೋಸಾ????????
ಇನ್ನೂ ಎಷ್ಟೊಂದು ಪ್ರೀತಿ ಕೋಡೋದು 
 ಬಾಕಿ ಇತ್ತೂ.....
 ನಿನ್ನ ಬಾಚಿ ತಬ್ಬಿಕೊಂಡು ನನ್ನ ಪ್ರಾಣ
 ನೀನು ಅಂಥ ಮುದ್ದಾಡೋದು ಇತ್ತೂ..
 ನಿನ್ನ ಸಂತೊಷ, ನಿನ್ನ ಸುಖ ಬದುಕನ್ನು ಈ ನನ್ನ
ಬಡ ಕಣ್ಣುಗಳು ನೋಡಿ  ತುಂಬಿಕೊಳ್ಳೊ  ಬಾಗ್ಯ ಬಾಕಿ ಇತ್ತೂ....
 ಇಷ್ಟು ಬೇಗ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದು
 ಯಾವ ನ್ಯಾಯ ತಂಗಿ...????????
 "ನಿನ್ನ ಆತ್ಮಕ್ಕೆ ಚಿರ ಶಾಂತಿ  ಸಿಗಲಿ"
ಮತ್ತೆ ನೀ ನನ್ನ ತಂಗಿಯಾಗೆ..... ಹುಟ್ಟಿ ಬಾ ಅಂಬು
 .................ಇಂತಿ ನಿನ್ನ ಪಾಪಿ ಅಣ್ಣ ಬಸು





Saturday, September 3, 2011

ಮನದ ಮಾತು..." ಹಸಿ ಮನದ ಸಿಹಿ ಭಾವನೆ"



"ಮನ ಮೆಚ್ಚುವ ಕೆಲಸ ಮಾಡು" ಅಂತ ದೊಡ್ಡೊರು ಹೇಳ್ತಾರೆ.. ಅಂದರೆ ಮೊದಲು ನಾವು ಮಾಡುವ ಕೆಲಸಗಳನ್ನು ನಮ್ಮ ಮನಸ್ಸು ಒಪ್ಪಬೇಕು ಎಂದರ್ಥ.  ನಂತರ ಈ ಜನ, ಈ ಪ್ರಪಂಚದ ಒಪ್ಪಿಗೆ...
ಹಾ... ನಮ್ಮ ಕೆಲಸವನ್ನ ನಮ್ಮ ಮನಸ್ಸು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ ಏನಾದರೊಂದು ತಗಾದೆ ತಗೆದು ಕೆಣಕುತ್ತದೆ, ನಿಂದಿಸುತ್ತದೆ.  ’ಅದು ಒಳ್ಳೆಯದಕ್ಕೆ ಇರಬಹುದು ಕೂಡ’! 
ಆದರೆ ಬೇರೆಯವರಿಂದ ಮೆಚ್ಚಿಸಿಕೊಳ್ಳುವುದು ತುಂಬ ಸುಲಭ..... 
ಅದು ಹೇಗೆ ಅಂದರೆ, ಯಾರೆ ಆದರೂ ಅಷ್ಟೆ ಕಣ್ರೀ... ಒಂಚೂರ್ ಏನಾದರೂ ಸಹಯಾ ಮಾಡಿ ಆಗೊ ಇಗೊ ಒಂದೆರಡು ಒಳ್ಳೆ ಮಾತುಗಳನ್ನ ಆಡಿಬಿಟ್ಟರೆ ಸಾಕು ಒಂದ್ ಮಟ್ಟಕ್ಕೆ ನಮ್ಮನ್ನ ಒಳ್ಳೆಯವನು/ಳು ಅಂತ ಅಂದ್ಕೊಬಿಡ್ತಾರೆ. 
ಆದ್ರೆ ನಮ್ಮ ಮನಸ್ಸು ಆಗಲ್ಲ ನೀನು ಅವರಿಂದ ಹೇಗೆ ಒಳ್ಳೆಯವನು/ಳು ಅನ್ನಿಸಿಕೊಂಡೆ ಅಂತ ಕೂಡ ತಿಳ್ಕೊಂಡಿರುತ್ತೆ  ನಿನ್ನ ಉದ್ದೇಶ ಒಳ್ಳೆಯದೆ ಆಗಿದ್ದಲ್ಲಿ ಖಂಡಿತ ನಿನ್ನನ್ನ ಪ್ರಶಂಸಿತ್ತದೆ, ಹೊಗಳುತ್ತದೆ, ಒಳಗೊಳಗೆ ಉಲ್ಲಸಗೊಳ್ಳುತ್ತದೆ, ನಗುತ್ತದೆ, ಕುಣಿಯುತ್ತದೆ, ಕುಪ್ಪಳಿಸುತ್ತದೆ. ಆಗ ಸಿಗುವ ಖುಷಿಯೇ.... ನಿಜವಾದ ಸಂತೋಷ. ಅಲ್ಲಿ ನಿಷ್ಕಲ್ಮಸವಾದ ಒಂದು ತೃಪ್ತಿ ಇರುತ್ತದೆ ಏನೇ ಕಷ್ಟಗಳು ಏದುರಾದರು ಒಳ್ಳೆಯದು ನನ್ನ ಹಿಂದಿದೆ ಅನ್ನೊ ದೈರ್ಯ ತುಂಬಿರುತ್ತದೆ.
ಆದರೆ ಜನಗಳ ಕಣ್ಣಿಗೆ ಒಳ್ಳೆಯವನಾಗ/ಳಾಗ ಬೇಕು ಎಂದು ಮನದಲ್ಲಿ ಒಲಸು ತುಂಬಿಕೊಂಡು ಬಾಯಿಯಲ್ಲಿ ಅಮೃತಾ ಸುರಿಸಿ, ಬೇರೆಯವರು ನೋಡುವಾಗ ಮಾತ್ರ ಒಳ್ಳೆಯವನಂತೆ/ಳಂತೆ ನಟಿಸಿದರೆ..... ನೆನೆಪಿರಲಿ ನಮ್ಮ ಮನಸ್ಸು ಯಾವತ್ತು ನಮ್ಮನ್ನ ಒಳ್ಳೆಯವನು/ಳು ಎಂದು ಒಪ್ಪಿಕೊಳ್ಳುವುದಿಲ್ಲ.... (ಏಕೆಂದರೆ ನಾವುಗಳು ಅದಕ್ಕೆ ಎಲ್ಲ ತಿಳಿಸಿಯೇ.. ಮುಂದುವರಿಯಬೇಕು ಅಲ್ವ?)  ನಮ್ಮ ನಗು ಹೊರಗಿನ ಪ್ರಪಂಚಕ್ಕೆ ಮಾತ್ರ ಸೀಮಿತವಾದದ್ದು, ನಮ್ಮ ಮನಸ್ಸು ಮಾತ್ರ  ನಮ್ಮನ್ನು ನಿಂದಸಿ, ಶಾಪಿಸಿ, ನಮ್ಮ ತಪ್ಪಿಗೆ ತಕ್ಕ ಪ್ರಾಯಶ್ಚಿತ್ತವನ್ನು ಅನುಭವಿಸುವಂತೆ  ಮಾಡೇ..ತೀರುತ್ತದೆ ಅದು ಎಂತಾ ಕಟುಕನಾದರು ಸರಿ ಕಟುಕಿಯಾದರು ಸರಿ.
  "ನಮಗೆ ಬೇರೆಯವರು ಕೊಡುವ ಶಿಕ್ಷೆಗಿಂತ ನಮಗೆ ನಾವು ಮಾಡಿಕೊಳ್ಳುವ ಶಿಕ್ಷೆ ತುಂಬ ನೋವಾಗುವಂತದ್ದು"

ನನ್ನ ಆಸೆ ಇಷ್ಟೇ... ಎಲ್ಲರೂ ತಮ್ಮ ತಮ್ಮ ಮನಸ್ಸಿಗೆ ಮೆಚ್ಚಿಗೆ ಆಗುವಂತೆ ನಡೆದುಕೊಳ್ಳಲಿ ಅಂತಾ.. ನಮ್ಮ ಮನಸ್ಸುಗಳಿಂದ ನಾವು ಯಾವಾಗಲು ಶಾಭ್ಬಷ್ ಅನ್ನಿಸಿಕೊಂಡುಬಿಡೋಣ ಈ  ಜನ್ಮ ಇರೊವರೆಗೂ.... ಏನಂತೀರಾ....?

ಇದು ನನ್ನ ಅನಿಸಿಕೆ........
 ನಿಮ್ಮ ಅಭಿಪ್ರಾಯಾ......?




ೇಸ್ದ್ಲೋಲೋನ್ಲೋಲೋೋಲೋ್ಿಲೋಸ್ದ್ಫ಼್