Friday, January 11, 2013

 

ಹೊಸ ವರ್ಷದ ಹಾರ್ಧಿಕ ಶುಭಾಷಯಗಳು?

ಯಾವುದು ಹೊಸ ವರ್ಷ? ಯಾರಿಗೆ ಹೊಸ ವರ್ಷ? ಏನಿದು ಹೊಸ ವರ್ಷ? 
 ಅವೆ ಕ್ಷಣಗಳು.. 
 ಅವೆ ದಿನಗಳು.. 
 ಅವೆ ವಾರಗಳು.. 
 ಅವೆ ತಿಂಗಳುಗಳು.. 
 ಅವೆ ದಿನಾ ’ಅಂಕಿ’ ಅಂಶಗಳು.. 
 ಅವೆ ಕೊಳೆತೆ ಮನಸ್ಸುಗಳು 
 ಅವೆ ಹುಳುಕು ದೇಹಗಳು 
 ಭ್ರಷ್ಟಾಚಾರದ ಅಭದ್ರ ರಾಜ್ಯಗಳು 
 ಶಿಷ್ಟಾಚಾರ ಮರೆತ ಮಲಿನ ಭ್ರಾಂತಿಯ ಜಾತಿ ಮತಗಳು 
 ಇನ್ನೇನಿದೆ ಇಲ್ಲಿ ಹೊಸತನದ ಗಮಲು? ಮತ್ತೇಕೆ ಈ ಹೊಸವರ್ಷಾಚಾರಣೆ ಮತ್ತದೆ ಕೊಳಕು ಮನಗಳಲಿ? 
 ಏನೇನು ಬದಲಾಗದ ನಾವು ಹೊಸತನವನ್ನು ಆಚರಿಸಲು ಎಷ್ಟು ಯೋಗ್ಯರು? 
 ಹಾದಿ ಬೀದಿಯಲ್ಲಿ ಕಿರುಚಾಡಿ ಊರಿಗೂರೆ ಗುಡುಗುವಂತೆ ಸದ್ದು ಗದ್ದಲ ಮಾಡಿಕೊಂಡು ನಟ್ಟನಡು ರಾತ್ರಿಯಲ್ಲಿ 
ಕುಡಿದ ಅಮಲಿನಲ್ಲ್ಲಿ 
 ತೂರಾಡಿಕೊಂಡು ಪುಂಡ ಪೋಕರಿಗಳು ಗೊಳ್ಳೋ.. ಎಂದು, ಸಿಕ್ಕ ಸಿಕ್ಕವರಿಗೆ(ಹ್ಯಾಪಿ ನಿವ್ ಯಿಯರ್ ಗುರು)   
ತೊಂದರೆ ಮಾಡಿಕೊಂಡು  
 ಎಲ್ಲೆಲ್ಲಿಂದಲೋ ಹೆಕ್ಕಿ ತಂದ ಹಣದಿಂದ ಡಬ್ ಡುಬ್ ಅಂತ ಪಟಾಕಿ ಸಿಡಿಸಿ ಜೊತೆಗೊಂದಿಷ್ಟು ವಾಯು ಮಾಲಿನ್ಯ 
ಮಾಡಿಕೊಂಡು 
 ನಿದ್ದೆಗೆಟ್ಟು ಹೊಸವರ್ಷಾಚರಣೆ ಅಂತ ಒಂದಿಷ್ಟು ಕಾಲಾಹರಣ ಮಾಡೋದು, ಇದೆ ಅಲ್ವ ನಮ್ಮೂರಲ್ಲಿ ನಡೆಯೋ ಹೊಸ 
ವರ್ಷಾದ ಸಂಭ್ರಮ? 
 ಅಲ್ಲಲ್ಲಿ ಸುಮ್ ಸುಮ್ನ್ ಜಗಳ ತಗೆದು ಹೊಡೆದಾಡಿ ರಂಪ ಮಾಡೋದು ಕೈ ಕಾಲು ಮುರಿದುಕೊಂಡು ಆಸ್ಪತ್ರೆ ಸೇರೋದು 
 ಮನೆಗಳಲ್ಲಿ ರಾತ್ರಿಯಲ್ಲ ನಿದ್ದೆ ಗೆಟ್ಟು ಕೇಕ್ ಕಟ್ ಮಾಡಿ ಕೇಕೆ ಹಾಕಿ ಮಲಗಿರೋರ್ ನಿದ್ದೆಗೆಡಸಿ ಸುಳ್ ಸುಳ್ ನಗುವಿಗೆ 
ಪಾತ್ರರಾಗೋದು 
 ಇದೆ ತಾನೆ ನಾವು ಮಾಡೋ ಗಣಂದಾರಿ ಹೊಸವರ್ಷಾಚರಣೆ...? 
 ಹಾಂ... ಇನ್ನೂ ಹೊಸವರ್ಷದಿಂದ ನಾನು ಕುಡಿಯೊ ಚಟ ಬಿಟ್ಬಿಡಿತೀನಿ ಮಗ, ನಾನು ಶ್ರಮ ವಹಿಸಿ ಕೆಲಸ ಮಾಡಿ 
ಒಳ್ಳೆ ಹೆಸರನ್ನ ಗಳಿಸ್ತೀನಿ 
 ಹಾಂ... ಇನ್ನೆಂದೂ ಕಳ್ಳತನ ಮಾಡಲ್ಲಪ್ಪ, ಸುಳ್ಳೇಳಿ ಮನೆಯವರ ಹತ್ತಿರಿ ಕಾಸ್ ಕಿತ್ತು ಸಿನಿಮಾ ನೋಡೊಲ್ಲ 
ಚೆನ್ನಾಗೆ ಓದಿ ಒಳ್ಳೆ ಅಂಕ ತೇಗಿತೀನಿ ಕಣೆ ನಾನು 
 ಹಾಂ..ಇನ್ನೂ ನಮ್ ಮನೆಯವರಿಗೆ ಅದು ಬೇಕು ಇದು ಬೇಕು ಅಂತ ಪ್ರಾಣ ತಿನ್ನೊಲ್ಲಪ್ಪ ಅಂತೆಲ್ಲ ರೆಸಲೂಸನ್ 
ಮಾಡ್ಕೊಳುದು, ನಿಜವಾಗ್ಲು ಇದನ್ನೆಲ್ಲ ಯಾರು ಎಷ್ಟು ದಿನ ಪಾಲಿಸುತ್ತಾರೆ 
 ಹುಟ್ಟಿದ ಗುಣ ಸುಟ್ಟರು ಹೋಗಲ್ಲ ಅಂದಾಗೆ ಮೂರ್ ದಿನಾಕ್ಕೊ ನಾಲ್ಕು ದಿನಕ್ಕೊ ಮರೆತು ಮಾಮುಲಿ ಆಗ್ಬಿಡ್ತೀವಿ ಅಲ್ವ?
 ನಿಜಾ ತಾನೆ!? 
 ಆದರೆ, ಮರ ಗಿಡಗಳು ಪ್ರತಿ ವಸಂತಕ್ಕೂ ತಮ್ಮೆಲ್ಲ ಎಲೆಗಳನ್ನು ಉದುರುಸಿಕೊಂಡು ಹೊಸದಾಗಿ ಹಸಿರ ಉಡುಗೆ 
ಹುಟ್ಟು ಮೈ ತುಂದುಕೊಂಡು ನಲಿದಾಡುತ್ತವೆ 
 ಹಾಗೂ ಎಲ್ಲೆಲ್ಲಿಂದಲೋ ಓಡೋಡಿ ಬರುವ ಹಕ್ಕಿ ಪಕ್ಷಿಗಳಿಗೆ ಮನೆಯಾಗುತ್ತವೆ, ಆ ಹಕ್ಕಿಗಳಲ್ಲೊ ಎಲ್ಲಿಲ್ಲದ ಲವಲವಿಕೆ
 ಕೂಗಾಟ, ಕಿರುಚಾಟ ಇಂಪಾದ ಮುದದಾಟ 
 ಎಷ್ಟು ಚಂದ ಅನಿಬಿಡುತ್ತದೆ ಅಲ್ವ? ಅದು ಹೊಸತನ ಅಂದ್ರೆ! 
 ಹಾವು ತನ್ನ ಮುದಿ ಮೈನ ಮೇಲಿನ ಚರ್ಮವನ್ನೂ ಕಿತ್ತೊಗೆದು ಅಂದೊಮ್ಮೆ ಮಿರಿಮಿರಿ ಮಿಂಚುತ್ತಾ ಅಲ್ಲಲ್ಲಿ 
ಹೆದರುತ್ತಾ... ಎಡೆ ಎತ್ತಿ ನಿಂತರೆ ಎಷ್ಟು ಭಯದಾನಂದ ಅಲ್ವ?
ಅದು ಹೊಸತನ ಅಂದ್ರೆ! 
 ಆದರೆ... ನಮ್ಮಲ್ಲೇನಿದೆ ಹೊಸತನ ಈ ಹೊಸ ಹೊಸದಾಗಿ ಪ್ರತಿ ವರ್ಷ ಬಂದೋಗುವ ಅವೆ ಹಳೆ ದಿನಗಳಲ್ಲಿ? 
 ಒಂದಂತು ನಿಜ ನಾವು ನಿರೀಕ್ಷಿಸದೆ ಬರುವ ಪ್ರತಿ ಕ್ಷಣವು ಹೊಸದೇ, ಆ ಕ್ಷಣ, ದಿನಗಳನ್ನ ಹೇಗೆ 
ಉಪಯೋಗಿಸಿಕೊಳ್ಳುತ್ತೇವೆ ಅನ್ನೋದು ಮುಖ್ಯ? 
 ನಾವು ನಮಗೆಷ್ಟು ಮಾಡಿಕೊಂಡೆವು ಅನ್ನೊದಕಿಂತ ಬೇರೆಯವರಿಗೆಷ್ಟು ಉಪಕಾರಿಯಾದೆವು ಎನ್ನುವುದು 
ತುಂಬ ಖುಷಿಕೊಡುತ್ತದೆ 
 ಪ್ರತಿಸಲ ಬೇರೆಯವರನ್ನ ದೂಷಿಸಿಕೊಂಡೆ ಕಾಲ ಕಳೆದುಬಿಡುತ್ತೇವೆ ಅದು ತಪ್ಪು ನಮ್ಮದೆ ಆಗಿದ್ದರು. 
 ಈ ದೇಶ ಭ್ರಷ್ಟಾಚಾರದಿಂದ ತುಂಬಿ ಹೊಯ್ತು, ರಾಜಕೀಯದಿಂದ ಎಲ್ಲ ಹಾಳಾಗಿ ಹೋಯ್ತು, ಅವನು ಸರಿಯಿಲ್ಲ 
ಇವನು ಸರಿಯಿಲ್ಲ ಅಂತೆಲ್ಲ ಬೇರೆಯವರನ್ನು  
 ಬಾಯಿಗೆ ಬಂದಾಗೆ ಬೈದುಕೊಂಡುಬಿಡುತ್ತೇವೆ.. ಆದರೆ ಒಮ್ಮೆ ಯೋಚನೆ ಮಾಡಿ ನೋಡಿ ನಾನು ಸರಿಯಿದ್ದೇನಾ? 
ಈ ದೇಶಕ್ಕೆ ಈ ಸಮಾಜಕ್ಕೆ ನಾನೇನೆಷ್ಟು ಉಪಚರಿಸಿದ್ದೇನೆ ಎಂದು 
 ಶೂನ್ಯ!.  ನಮ್ಮ ಜನಗಳಿಗೆ ನನ್ನದು ಎನ್ನುವುದು ತಮ್ಮ ತಮ್ಮ ಮನೆ,ಬಂಧು ಬಾಂಧವರಿಗೆ ಮಿಸಲಾಗಿದೆ ಮತ್ತೇಗೆ 
ನಮ್ಮ ದೇಶ ಎಲ್ಲ ಇದ್ದು ಸಿರಿವಂತ ದೇಶವಾಗೋದು? ಮತ್ತೇಗೆ ನಮ್ಮ ದೇಶದಲ್ಲಿರೊ ಜನಗಳು 
 ಬಡತನದಿಂದ ಹೊರಬರೋದು, ನಮ್ಮ ಮನೆಯಂಗಳದ ಕಸವನ್ನು ರಸ್ತೆಗೆ ಗುಡಿಸಿಬಿಡುತ್ತೇವೆ.. ಅಂದರೆ ಅಂಗಳ ನಮ್ಮದು.  
 ರಸ್ತೆ ಯಾರದು? ಸರಕಾರದ್ದೆ? ಸರಕಾರ ಎಂದರೆ ಯಾರು? 
 ನಿಜಕ್ಕೂ ’ಸೂಪರ್” ಚಿತ್ರ ನೆನೆಪಾಗುತ್ತದೆ ಉಪೇಂದ್ರರವರ ಆ ಅದ್ಭುತ ಕಲ್ಪನೆ ನಿಜವಾಗಬಾರದೇಕೆ ಎನಿಸುತದೆ. 
 ಸುಖಸುಮ್ಮನೆ ಈ ರೀತಿಯ ಆಚಾರಣೆಗಳಿಂದ ಮೂಢರಾಗುತ್ತಿದ್ದೆವೆ ಎನಿಸುತಿದೆ, ಹಣ ಕಾಲ ಎಲ್ಲವನ್ನು 
ವ್ಯಾರ್ತಮಾಡುತ್ತಿದ್ದೇವೆ ಎನಿಸುತಿದೆ, 
 ತುತ್ತಿಗಾಗಿ ಚಡಪಡಿಸೋ ಜೀವಿಗಳು ನಮ್ಮ ಅಕ್ಕ-ಪಕ್ಕದಲ್ಲೇ ಇದ್ದರೂ ಮರೆತೆದ್ದೆವೆ ಎನಿಸುತ್ತಿದೆ, ಪ್ರೀತಿ, 
ವಿಶ್ವಾಸವನ್ನು ತೊರೆದು ಕೋಪ ತಾಪಕ್ಕೆ ಮನಸ್ಸೊಡ್ಡಿದ್ದೇವೆ ಎನಿಸುತಿದೆ, 
 ಪ್ರೀತಿಯಿಂದ, ಒಳ್ಳೆತನವ ಮೈಗೂಡಿಸಿಕೊಳ್ಳುವುದರಿಂದ, ಕಷ್ಟದಲ್ಲಿರುವವರಿಗೆ ಸಹಾಯಕರಾಗುವುದರಿಂದ, 
ಪ್ರತಿ ಕ್ಷಣವನ್ನು ಆಚಾರಿಸೋಣ ಪ್ರತಿ ದಿನವನ್ನು ಸಂಭ್ರಮಿಸೋಣ  
 ಜನವರಿ ಒಂದರ ಆಚಾರಣೆ ಒಂದು ದಿನಕ್ಕೆ ವಿಸಲಿಡದೆ ಪ್ರತಿಕ್ಷಣವು ಹೊಸತನವನ್ನು ಮೈಗೂಡಿಸಿಕೊಳ್ಳೋಣ, 
ಈ ದೇಶದ, ಈ ಜಗತ್ತಿನ  ಒಳಿತಿಗಾಗಿ ಶ್ರಮಿಸೋಣ,
......................................................................ಬಸು 

No comments:

Post a Comment